೧೭ ಡಿಸೆಂಬರ್, ೧೯೭೧ರಲ್ಲಿ ಪಾಕಿಸ್ತಾನದ ಇಬ್ಭಾಗವಾಯಿತು. ಒಡೆದು ಎರಡು ಹೋಳಾಯಿತು. ಬಾಂಗ್ಲಾದೇಶ ಹುಟ್ಟಿಕೊಂಡಿತು. ಬಾಂಗ್ಲಾಗೆ ಭಾರತ ತನ್ನ ಸಂಪೂರ್ಣ ಬೆಂಬಲ-ಸಹಕಾರ ನೀಡಿತು. ಮುಕ್ತಿವಾಹಿನಿ (ಬಾಂಗ್ಲಾಸೇನೆ) ತನ್ನ ಸಂಪೂರ್ಣ ಬೆಂಬಲ ನೀಡಿತು. ಪಾಕ್ ಸೋಲೊಪ್ಪಿಕೊಂಡಿತು. ಮುಜೀಬುರ್ ರೆಹಮನ್ ಆ ದೇಶದ ಜನನಾಯಕರಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಾಗಿತ್ತು.
ಆಗಸ್ಟ್ ೧೯೭೫- ಇಸ್ಲಾಮಿಕ್ ಸೇನಾ ಪಡೆ ದಂಗೆದ್ದು ಮುಜೀಬುರ್ ರೆಹಮನ್ರನ್ನು, ಅವರ ಕುಟುಂಬದವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಮಾಡಿತು. ದೇಶ-ದೇಶಗಳ ನಡುವಿನ ವೈಷಮ್ಯ ಪಾಕ್ನಲ್ಲಿ ಬೇರೂರಿ ಮತ್ತೊಂದು ಆಕಾರ ತಳೆಯಿತು. ಅದು ಕಾಶ್ಮೀರವನ್ನು ಪಾಕ್ನೊಂದಿಗೆ ವಿಲೀನವಾಗಿಸುವ ಹುನ್ನಾರ. ಗೂಢಚರ್ಯೆ ಮುಖ್ಯಸ್ಥ ನೂರು ಕೋಟಿ ಬೇಡಿಕೆ ಮುಂದಿಡುತ್ತಾನೆ. ಐನೂರು ಕೋಟಿ ಕೊಡುವುದಾಗಿ ಆತನ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾನೆ - ಪಾಕ್ ಸರ್ಕಾರದ ಆಗಿನ ಪ್ರಧಾನಿ.
ನೂರು ಕೋಟಿಯೊಂದಿಗೆ ಆತ ಕಾಣೆಯಾಗುತ್ತಾನೆ. ನಲವತ್ತು ವರ್ಷ... ಪಾಕ್ಗೆ ನೂರು ಕೋಟಿ ಮೊತ್ತದ ಹೊರತು ಮತ್ತೇನೂ ಗೊತ್ತಿಲ್ಲ... ಅದರ ಹಿನ್ನೆಲೆ - ಸಂಚೇನು...? ಅವನು ಇದ್ದಾನೋ... ಸತ್ತಿದ್ದಾನೋ...?
ಆಳವಾಗಿ ಬೇರುಬಿಟ್ಟ ವೈಷಮ್ಯ, ನೆಲದಾಹ... ಭಾರತ ಬೇಹುಗಾರಿಕೆಯಲ್ಲಿ ಸಂಚಲನ... ಅಳಿಸಿಹೋದ ಹೆಜ್ಜೆ ಗುರುತುಗಳ ಅನ್ವೇಷಣೆ... ಎಲ್ಲವೂ ನಿಗೂಢ...
೧೭ ಡಿಸೆಂಬರ್, ೧೯೭೧ರಲ್ಲಿ ಪಾಕಿಸ್ತಾನದ ಇಬ್ಭಾಗವಾಯಿತು. ಒಡೆದು ಎರಡು ಹೋಳಾಯಿತು. ಬಾಂಗ್ಲಾದೇಶ ಹುಟ್ಟಿಕೊಂಡಿತು. ಬಾಂಗ್ಲಾಗೆ ಭಾರತ ತನ್ನ ಸಂಪೂರ್ಣ ಬೆಂಬಲ-ಸಹಕಾರ ನೀಡಿತು. ಮುಕ್ತಿವಾಹಿನಿ (ಬಾಂಗ್ಲಾಸೇನೆ) ತನ್ನ ಸಂಪೂರ್ಣ ಬೆಂಬಲ ನೀಡಿತು. ಪಾಕ್ ಸೋಲೊಪ್ಪಿಕೊಂಡಿತು. ಮುಜೀಬುರ್ ರೆಹಮನ್ ಆ ದೇಶದ ಜನನಾಯಕರಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡಾಗಿತ್ತು.
ಆಗಸ್ಟ್ ೧೯೭೫- ಇಸ್ಲಾಮಿಕ್ ಸೇನಾ ಪಡೆ ದಂಗೆದ್ದು ಮುಜೀಬುರ್ ರೆಹಮನ್ರನ್ನು, ಅವರ ಕುಟುಂಬದವರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಮಾಡಿತು. ದೇಶ-ದೇಶಗಳ ನಡುವಿನ ವೈಷಮ್ಯ ಪಾಕ್ನಲ್ಲಿ ಬೇರೂರಿ ಮತ್ತೊಂದು ಆಕಾರ ತಳೆಯಿತು. ಅದು ಕಾಶ್ಮೀರವನ್ನು ಪಾಕ್ನೊಂದಿಗೆ ವಿಲೀನವಾಗಿಸುವ ಹುನ್ನಾರ. ಗೂಢಚರ್ಯೆ ಮುಖ್ಯಸ್ಥ ನೂರು ಕೋಟಿ ಬೇಡಿಕೆ ಮುಂದಿಡುತ್ತಾನೆ. ಐನೂರು ಕೋಟಿ ಕೊಡುವುದಾಗಿ ಆತನ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾನೆ - ಪಾಕ್ ಸರ್ಕಾರದ ಆಗಿನ ಪ್ರಧಾನಿ.
ನೂರು ಕೋಟಿಯೊಂದಿಗೆ ಆತ ಕಾಣೆಯಾಗುತ್ತಾನೆ. ನಲವತ್ತು ವರ್ಷ... ಪಾಕ್ಗೆ ನೂರು ಕೋಟಿ ಮೊತ್ತದ ಹೊರತು ಮತ್ತೇನೂ ಗೊತ್ತಿಲ್ಲ... ಅದರ ಹಿನ್ನೆಲೆ - ಸಂಚೇನು...? ಅವನು ಇದ್ದಾನೋ... ಸತ್ತಿದ್ದಾನೋ...?
ಆಳವಾಗಿ ಬೇರುಬಿಟ್ಟ ವೈಷಮ್ಯ, ನೆಲದಾಹ... ಭಾರತ ಬೇಹುಗಾರಿಕೆಯಲ್ಲಿ ಸಂಚಲನ... ಅಳಿಸಿಹೋದ ಹೆಜ್ಜೆ ಗುರುತುಗಳ ಅನ್ವೇಷಣೆ... ಎಲ್ಲವೂ ನಿಗೂಢ...